ಇಲ್ಲ, ನಿಜವಾಗಿ ಪಾಕ್ ಉಗ್ರರು ಎಲ್ಲಾ ಜಾತಿಯ ಹಿಂದೂಗಳನ್ನೂ ಗುರಿ ಮಾಡಿ ಭಯ ಹರಡಿದ್ದರು. ಆದರೆ ಹೆಚ್ಚಾಗಿ ಶ್ರೀನಗರದಲ್ಲಿ ಕೇಂದ್ರಿತವಾದ ಪಂಡಿತರನ್ನು ಕಾಶ್ಮೀರದ ಆಗಿನ ಗವರ್ನರ್ ಜಗಮೋಹನ್ ತುರಾತುರಿಯಿಂದ ಜಮ್ಮುವಿಗೆ ವಲಸೆ ಹೊಗುವಂತೆ ಒತ್ತಾಯಿಸಿ ಅವರಿಗೆ ಸಾರಿಗೆ ಒದಗಿಸಿದರಂತೆ. ಡೋಗ್ರಾ ಮತ್ತು ಇತರ ಹಿಂದೂಗಳು ಹಳ್ಳಿಗಳಲ್ಲಿ ಇರುತ್ತಿದ್ದು, ಅವರು ಅಲ್ಲಿಯೇ ಉಳಿದು ಉಗ್ರರನ್ನು ಪ್ರಬಲವಾಗಿ ಎದುರಿಸಿದರು. ಹಾಗಾಗಿ ಸರ್ಕಾರದ ಅಧಿಕೃತ ಅಂಕಿ ಅಂಶಗಳ ಪ್ರಕಾರ, 1990ರಲ್ಲಿ ಪಾಕ್ ಉಗ್ರರು 219 ಪಂಡಿತರನ್ನು ಕೊಂದರೆ, 1700ಕ್ಕೂ ಹೆಚ್ಚು ಡೋಗ್ರಾ, ದಲಿತ ಹಿಂದೂ ಮತ್ತು ಸಿಖ್ಖರನ್ನು ಕೊಂದರಂತೆ. ಹಾಗಾದರೆ ಜನರಿಗೆ ಸತ್ಯ ತಿಳಿಯಬೇಕಾದರೆ ‘ಕಾಶ್ಮೀರ ಡೋಗ್ರಾ ಫೈಲ್ಸ್’ ಸಹ ಚಲಚಿತ್ರ ಆಗಬೇಕು ಅಲ್ಲವೇ?